Friday, December 4, 2009

ಅಹಂ.

ಅಹಮ್ಮಿನ

ಕೋಟೆಯಲ್ಲಿ

ಅಧಿಪತಿಯಾಗಿ ಮೆರೆವಾಗ

ಸಂಬಂಧಗಳಿಗೆ ಬೆಲೆಸಿಗುವುದೇ?

ಸಾವಿನಾಚೆ.

ಸಾವಿನಾಚೆಗೊಂದು
ಬದುಕು ಕಟ್ಟಿಕೊಳ್ಳಿ,
ಅಲ್ಲಿ ಸಾವಿನ ಭಯವಿರುವುದಿಲ್ಲ!!

ಉತ್ತರಗಳಿಲ್ಲದ ಪ್ರಶ್ನೆ.

ನದಿ ಹರಿದು
ಸಾಗರ ಸೇರೋದು
ಕಳೆದುಹೊಗೋದು
ಪ್ರೀತಿಯಿಂದಲೋ
ಅಥವಾ
ಅಂತ್ಯ ಸಂಸ್ಕಾರಕ್ಕೋ?

ಪರಿಹಾರ.

ನನ್ನ

ಸಾವು ಮಾತ್ರ

ನನ್ನ ಕಾಡದ

ನೋವಾಗಬಹುದು. - ಅವಿನಾಶ್ ಹನಕೆರೆ.

ಪ್ರೇರಕ.

ಬದುಕುವ ಆಸೆಗೆ

ಸಾವೇ ಪ್ರೇರಣೆ!

ಕನಸು - ಭ್ರಮೆ.

ಕನಸುಗಲಿರಲಿ ಭ್ರಮೆಯಲ್ಲ

ಕಷ್ಟದ ಸಂಗತಿ ಎಂದರೆ

ಬಹಳಷ್ಟು ಬಾರಿ

ಅವೆರಡಕ್ಕೂ

ವ್ಯತ್ಯಾಸವೇ ತಿಳಿಯುವುದಿಲ್ಲ.

ಅರ್ಥ.

ವ್ಯವಸ್ಥಿತವಾಗಿ
ಅವ್ಯವಸ್ಥೆಯ ಕಡೆಗೆ ಸಾಗುವುದೇ ಜೀವನ.

ಕನಸು.

ವಾಸ್ತವಕ್ಕೆ

ಬಣ್ಣ ತುಂಬಲು

ಕನಸುಗಳಿರಬೇಕು.

ಮುಖವಾಡ 2

ಮುಖವಾಡಗಳ ಮರೆಯಲ್ಲಿ
ಮರೆಯಾದವರು ನಾವು
ಮುಖವಾಡ
ಕಳಚೋಣವೆಂದರೆ
ಅಸಲಿ ಮುಖದ
ಕುರುಹೇ ಇಲ್ಲ!!

ಮುಖವಾಡ

ಇಲ್ಲಿರುವವರು
ನಾವಲ್ಲ,
ನಮ್ಮ
ಮುಖವಾಡಗಳಷ್ಟೇ